'ಸೀತಾರಾಂ ನಡೆಸಿದ ಸಭೆಯಲ್ಲಿ ಹಲವರು ಭಾಗವಹಸಿದ್ದರು. ಶಾಸಕ ಸಂಗಮೇಶ್, ಪಕ್ಷದ ಕೆಲವು ಪದಾಧಿಕಾರಿಗಳು ಭಾಗವಹಿಸಿದ್ದರು. ಅವರೆಲ್ಲ ಆ ಸಭೆಯಲ್ಲಿ ಯಾಕೆ ಭಾಗವಹಿಸಿದ್ದರು. ಈ ಬಗ್ಗೆ ಅವರಿಗೂ ನೋಟಿಸ್ ಕೊಡುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿದ್ದಾರೆ. ಅವರು ರಾಜ್ಯಕ್ಕೆ ವಾಪಸ್ಸಾದ ಬಳಿಕ ಚರ್ಚಿಸಿ ನೋಟಿಸ್ ಕೊಡುತ್ತೇವೆ' ಎಂದರು.