ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಡಿವಿಜಿ ಅವರು ಮಂಕುತಿಮ್ಮನ ಕಗ್ಗದ ಮೂಲಕವೇ ಕನ್ನಡಿಗರಿಗೆ ಪರಿಚಿತರು. ಆದರೆ ಅವರು ಪತ್ರಿಕೋದ್ಯ, ಸಾಹಿತ್ಯ ಸೃಷ್ಟಿ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಜಕೀಯದ ಬಗ್ಗೆ ಸಮರ್ಥ ಮುನ್ನೋಟವನ್ನು ಹೊಂದಿದ್ದರೆ. ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಏಕೀಕರಣ ಕಾಯಕಕ್ಕೂ ಸ್ಫೂರ್ತಿ ನೀಡುವ ಬರಹಗಳನ್ನುಅವರು ಬರೆದಿದ್ದರು’ ಎಂದು ಹೇಳಿದರು.