ಹಲವು ದಿನಗಳಿಂದ ತಾಲ್ಲೂಕಿನಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಬಂಟಹಳ್ಳಿ, ಡಿ.ಎನ್.ದೊಡ್ಡಿ ಗ್ರಾಮಗಳ ಬಳಿ ಕಾಣಿಸಿಕೊಂಡಿದ್ದ ಆರು ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿ ಧನಲಕ್ಷ್ಮಿ ಮತ್ತು ಸಿಬ್ಬಂದಿ ತಮಿಳುನಾಡು ಅರಣ್ಯದತ್ತ ಓಡಿಸಿದ್ದರು. ಬುಧವಾರ ಮುಂಜಾನೆ ಮತ್ತೆ ಅರಳೇರಿ ಗ್ರಾಮದ ಬಳಿ ಇದೇ ಹಿಂಡು ಕಾಣಿಸಿಕೊಂಡಿದೆ.