ಬೆಂಗಳೂರು: 'ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಧ್ಯಾಹ್ನ 3ಕ್ಕೆ ರೈತರ ಸಭೆ ಕರೆದಿದ್ದಾರೆ. ಕಾಯ್ದೆಗಳ ತಿದ್ದುಪಡಿಗಳಿಂದಾಗಿ ರೈತರಿಗೆ, ಕಾರ್ಮಿಕರಿಗೆ ಆಗುವ ಅನ್ಯಾಯದ ಕುರಿತು ಅವರ ಗಮನಕ್ಕೆ ತರಲಾಗುವುದು. ಸುಗ್ರೀವಾಜ್ಞೆ ವಾಪಸ್ ಗೆ ಒತ್ತಾಯಿಸಲಾಗುವುದು' ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.