ಪ್ರತಿ ತಾಲ್ಲೂಕಿನಿಂದ ಕನಿಷ್ಠ ಒಂದು ಲಾರಿ ಹೊರಡಲಿದೆ. ಪ್ರತಿ ಲಾರಿಯಲ್ಲಿ ತಲಾ ಹತ್ತು ಹಾರೆ, ಹತ್ತು ಗುದ್ದಲಿ, ಹತ್ತು ಪಿಕಾಸಿ, ಹತ್ತು ಬುಟ್ಟಿ ಹೀಗೆ ಕೆಲಸಕ್ಕೆ ಬೇಕಾದ ಸಾಮಗ್ರಿಗಳನ್ನು ಒಯ್ಯಲಾಗುತ್ತದೆ. ಯಾವ ರೈತನೂ ಕೈಬೀಸಿಕೊಂಡು ಬರುವಂತಿಲ್ಲ. ಒಂದು ಸಾಮಗ್ರಿಯನ್ನಾದರೂ ಹಿಡಿದುಕೊಂಡು ಬರಬೇಕು ಎಂದು ತೀರ್ಮಾನವಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.