ಬೆಂಗಳೂರು: ವಸತಿ ಸಮುಚ್ಚಯವೊಂದರ ಮಾಲೀಕರ ಸಂಘದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅರ್ಜಿದಾರರಿಂದ ₹ 10,000 ಲಂಚಕ್ಕೆ ಬೇಡಿಕೆ ಇಟ್ಟು, ₹ 5,000 ಪಡೆದಿದ್ದ ಪ್ರಕರಣದಲ್ಲಿ ನಗರದ ಮೂರನೇ ವಲಯದ ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಪಿ. ಸದಾಶಿವ, ‘ಅಪರಾಧಿ’ ಎಂದು ವಿಶೇಷ ನ್ಯಾಯಾಲಯ ಸಾರಿದ್ದು, ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ.