ಕಲ್ಯಾಣ ಕರ್ನಾಟಕದಲ್ಲಿ ‘ಮಂಗಳಮೂರ್ತಿ’ಯ ಮೆರವಣಿಗೆ ಸಂಭ್ರಮ ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಾಪಿಸಿದ್ದ ಭಿನ್ನ, ವಿಭಿನ್ನ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಈ ಬಾರಿ ಡಿಜೆ ಬಳಕೆಗೆ ಅವಕಾಶ ನೀಡದ ಕಾರಣ ವಿನಾಯಕ ಮಂಡಳಿಗಳು ತಮಟೆ, ಡ್ರಮ್ಸ್ಗೆ ಆದ್ಯತೆ ನೀಡಿದ್ದವು. ಭಕ್ತರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು.