ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್ಎಸ್ನ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಜೆಡಿಎಸ್ ಸಚಿವರು ಹಾಗೂ ಶಾಸಕರ ರಹಸ್ಯ ಸಭೆ ನಡೆಸಿದರು.
ಭಾನುವಾರ ತಡರಾತ್ರಿಯೇ ಹೋಟೆಲ್ಗೆ ಬಂದು ತಂಗಿದ್ದ ಅವರು ಸೋಮವಾರ ಮಧ್ಯಾಹ್ನ 12 ಗಂಟೆವರೆಗೂ ಸಭೆ ನಡೆಸಿದರು. ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ನಿಖಿಲ್ ಅವರ ಪ್ರಚಾರ, ಗೆಲುವಿಗಾಗಿ ತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.