ಈ ಕುರಿತು ಶಿವರಾಮು ಅವರನ್ನು ವಿಚಾರಿಸಿದರೆ, ‘ಪೊಲೀಸರು ಎಷ್ಟೇ ಹೇಳಿದರೂ ಅನೇಕ ಸವಾರರು ದಂಡ ಕಟ್ಟುತ್ತಾರೆ ವಿನಾ ಹೆಲ್ಮೆಟ್ ಧರಿಸುವುದಿಲ್ಲ. ಇತ್ತೀಚೆಗೆ ನಗರದಲ್ಲಿ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಿಂದ ಯುವಕನೊಬ್ಬ ಯದ್ವಾತದ್ವಾ ಬೈಕ್ ಓಡಿಸಿ ಬಿದ್ದು ಗಾಯಗೊಂಡ. ಆ ದೃಶ್ಯ ನೋಡಿದ ಬಳಿಕ ಹೆಲ್ಮೆಟ್ ಕೊಟ್ಟರೆ ಒಬ್ಬರ ಪ್ರಾಣವಾದರೂ ಉಳಿಸಿದಂತಾಗುತ್ತದೆ ಎಂದು ಈ ತೀರ್ಮಾನಕ್ಕೆ ಬಂದೆ’ ಎಂದು ತಿಳಿಸಿದರು.