ಈ ವಿಚಾರದಲ್ಲಿ, "ಮಣ್ಣನ್ ₹50 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ" ಎಂದು ಆರೋಪಿಸಿ 2019ರ ಸೆಪ್ಟೆಂಬರ್ 22ರಂದು ಸಿಬಿಐ ಮಣ್ಣನ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ಮಣ್ಣನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
"ಈ ಆರೋಪವು ಜಯಂತಿ ಅವರು ನನಗೆ ನೀಡುತ್ತಿರುವ ಕಿರುಕುಳ. ನನ್ನ ಮೊಬೈಲ್ ಫೋನ್ ಟ್ಯಾಪ್ ಮಾಡಿದ್ದು ಅಕ್ರಮ. ನಾನು ಲಂಚಕ್ಕೆ ಬೇಡಿಕೆ ಇರಿಸಿದ್ದಕ್ಕೆ ಮತ್ತು ಪಡೆದದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ ಸಿಬಿಐ ಲಕೋಟೆಯಲ್ಲಿ ಹಣವಿತ್ತು ಎಂದು ಹೇಳುತ್ತಿದೆ. ಆದರೆ, ಅದಕ್ಕೆ ಆಧಾರವಿಲ್ಲ" ಎಂದು ಪ್ರತಿಪಾದಿಸಿದ್ದರು.