ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದೂರುದಾರನ ಹೇಳಿಕೆಗಳೆಲ್ಲಾ ಸುಳ್ಳು: ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್‌ ಸ್ಪಷ್ಟನೆ

ಧರ್ಮಸ್ಥಳ ಪ್ರಕರಣ
Published : 18 ಸೆಪ್ಟೆಂಬರ್ 2025, 20:30 IST
Last Updated : 18 ಸೆಪ್ಟೆಂಬರ್ 2025, 20:30 IST
ಫಾಲೋ ಮಾಡಿ
Comments
ಚಿನ್ನಯ್ಯನ ಹೇಳಿಕೆ ಆಧರಿಸಿ ಮತ್ತಷ್ಟು ಸ್ಥಳಗಳಲ್ಲಿ ಅಗೆಯಲು ನಿರ್ದೇಶಿಸಬೇಕು ಎಂದು ಕೋರಿದ್ದೀರಿ. ನಿಮಗೆ ಅವಕಾಶ ಕೊಟ್ಟರೆ ಇನ್ನೂ 10 ಜನರು ಬಂದು ನಾವು ಹೇಳಿದ ಸ್ಥಳಗಳಲ್ಲಿ ಅಗೆಯಲು ನಿರ್ದೇಶಿಸಬೇಕು ಎನ್ನುತ್ತಾರೆ.
– ಎಂ.ನಾಗಪ್ರಸನ್ನ, ನ್ಯಾಯಮೂರ್ತಿ
ಅನನ್ಯಾ ಭಟ್‌ ಕಥೆಯೆಲ್ಲಾ ಸುಳ್ಳು...
‘ನನ್ನ ಮಗಳು ಅನನ್ಯಾ ಭಟ್‌ 2003ರಲ್ಲಿ ಧರ್ಮಸ್ಥಳಕ್ಕೆ ಹೋದವಳು ನಾಪತ್ತೆ ಯಾಗಿದ್ದಾಳೆ ಎಂದು ನಾನು ಆಕೆಯ ತಾಯಿ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್‌ ಅವರ ಹೇಳಿಕೆಗಳೂ ಸುಳ್ಳು ಎಂಬುದು ಎಸ್‌ಐಟಿ ತನಿಖೆಯ ವೇಳೆ ಕಂಡುಬಂದಿದೆ’ ಎಂದು ಜಗದೀಶ್‌ ನ್ಯಾಯಪೀಠಕ್ಕೆ ತಿಳಿಸಿದರು. ‘ಸುಜಾತಾ ಭಟ್‌ ತೋರಿಸಿದ್ದ ಯುವತಿಯ ಫೋಟೊ ಅನುಸರಿಸಿ ಆ ಯುವತಿಯ ವಾರಸುದಾರರನ್ನು ಬೆಂಗಳೂರಿನಲ್ಲಿ ಗುರುತಿಸಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಸುಜಾತಾ ಭಟ್‌ ತೋರಿಸಿದ್ದ ಫೋಟೊದಲ್ಲಿನ ಯುವತಿ ಅವರ ಪುತ್ರಿಯಲ್ಲ ಎಂಬುದು ಈ ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಜಗದೀಶ್ ಸ್ಪಷ್ಟಪಡಿಸಿದರು.
‘ತಾರ್ಕಿಕ ಅಂತ್ಯ ಕಾಣಲಿದೆ’
‘ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣ ತಿಳಿಸಿದರು. ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT