ಗುರುವಾರ ಬೆಳಿಗ್ಗೆ ಬಯಲಿನಲ್ಲಿ ಮೇಯುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ. ಸ್ಟಡ್ ಫಾರಂ ವ್ಯವಸ್ಥಾಪಕ ಡಾ.ದಿನೇಶ್ ಮತ್ತು ಮನೋಜ್ ನೇತೃತ್ವದ ತಂಡ ತೀವ್ರ ಅಸ್ವಸ್ಥಗೊಂಡಿದ್ದ ಕುದುರೆಗಳಿಗೆ ಚಿಕಿತ್ಸೆ ನೀಡಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ. ಏರ್ ಸಪೋರ್ಟ್ ಕುದುರೆಗೆ ಜನಿಸಿದ್ದ ‘ವಾರ್ ಹ್ಯಾಮರ್’ ಹೆಸರಿನ ಕುದುರೆಯು ಏಷ್ಯಾದ ಪ್ರತಿಷ್ಠಿತ ಇಂಡಿಯನ್ ಡರ್ಬಿ ರೇಸ್ನಲ್ಲಿ ಗೆಲುವು ಸಾಧಿಸಿತ್ತು.