‘ನಾನು ಸಚಿವನಾದ ಬಳಿಕ ಇಲಾಖೆಗೆ ₹ 1,200 ಕೋಟಿ ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ಫಲಾನುಭವಿಗಳಿಗೆ ಹೋಗುತ್ತದೆ. ಆದರೆ, ಪಟ್ಟಿ ಮಾಡಿರುವುದರಲ್ಲಿ ಅನೇಕ ಅನರ್ಹರು ಇದ್ದಾರೆ. ಇದುವರೆಗೂ ಕೂಡಾ ಎಷ್ಟು ಅನರ್ಹರಿಗೆ ಮನೆಗಳು ಸಿಕ್ಕಿವೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪು ಮಾಡಿದ ಪಿಡಿಒಗಳ ಮೇಲೆ ಎಫ್ಐಆರ್ ಮಾಡಿದ್ದೇವೆ. ಇನ್ನು ಮುಂದೆ ಕಾನೂನು ಚೌಕಟ್ಟಿನಲ್ಲಿ ಮುಂದುವರೆಯುತ್ತೇನೆ’ ಎಂದರು.