ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಹಂಚಿಕೊಂಡಿರುವ ಕೆಪಿಸಿಸಿ, ‘ಆತ್ಮಹತ್ಯೆಗಳಿಗೆ ಆರ್ಥಿಕ ಅಸ್ಥಿರತೆ, ಭವಿಷ್ಯದ ಬಗೆಗಿನ ಅತಂತ್ರ ಭಾವ, ನಿರುದ್ಯೋಗದ ಆತಂಕ, ಸಾಮಾಜಿಕ ವ್ಯವಸ್ಥೆಗಳು ಪ್ರಮುಖ ಕಾರಣವಾಗುತ್ತವೆ. ಆತ್ಮಹತ್ಯೆಯಲ್ಲಿ ಕರ್ನಾಟಕವು 5ನೇ ಸ್ಥಾನಕ್ಕೆ ಏರಿರುವುದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವೇ ನೇರ ಕಾರಣ. ಈ ಸಂತೋಷಕ್ಕಾಗಿ ಭ್ರಷ್ಟೋತ್ಸವ ನಡೆಸುತ್ತಿರುವುದೇ ಬಿಜೆಪಿ ಸರ್ಕಾರ?’ ಎಂದು ಪ್ರಶ್ನಿಸಿದೆ.