ಬೆಂಗಳೂರು: ಜೂನ್ 03ರ ಸಂಜೆ 5 ಗಂಟೆಯಿಂದ ಜೂನ್ 04ರ ಸಂಜೆ 5 ಗಂಟೆವರೆಗೆ 257 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,320ಕ್ಕೆ ತಲುಪಿದ್ದು, ಕೊರೊನಾ ಸೋಂಕಿನಿಂದ ಈವರೆಗೂ 57 ಮಂದಿ ಸಾವಿಗೀಡಾಗಿದ್ದಾರೆ.
1,610 ಜನರು ಸೋಂಕಿನಿಂದ ಗುಣಮುಖರಾಗಿದ್ದು, 2,651ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
13 ಕೊರೊನಾ ಪೀಡಿತರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಹಾಸನ ಹಾಗೂ ಮಂಡ್ಯದಲ್ಲಿ 15, ದಾವಣಗೆರೆಯಲ್ಲಿ 13 , ಬೆಳಗಾವಿ 12 ಮತ್ತು ಬೆಂಗಳೂರು ನಗರದಲ್ಲಿ 09 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.