ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿದಾರರಿಗೆ ಸರಿಯಾದ ಸಮಯಕ್ಕೆ ಪ್ರಯಾಣ ಭತ್ಯೆ, ವಿಶೇಷ ಭತ್ಯೆ ನೀಡದ ಕಾರಣ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಹಲವು ಪ್ರಕರಣಗಳಲ್ಲಿ ಹಿನ್ನಡೆಯಾಗಿದೆ ಎಂಬದು ಸರಿಯಲ್ಲ. ಅಂತಹ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಸಂತ್ರಸ್ತರು, ಅವರ ಅವಲಂಬಿತರು, ಸಾಕ್ಷಿದಾರರು ಮತ್ತು ಸಹಾಯಕರಿಗೆ ಪ್ರಯಾಣ ಭತ್ಯೆ, ಆಹಾರ ಭತ್ಯೆ, ವೈದ್ಯಕೀಯ ಹಾಗೂ ದಿನ ಭತ್ಯೆಗಳನ್ನು ನೀಡಲಾಗುತ್ತಿದೆ ಎಂದು ಗೃಹ ಸಚಿವರು ವಿವರ ನೀಡಿದ್ದಾರೆ.