ಕಲಬುರಗಿ: ಅಫಜಲಪುರದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಕೆಇಎ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿ ಬಂಧಿತರಾದ ಏಳು ಜನರನ್ನು ಪೊಲೀಸರ ತಮ್ಮ ವಶಕ್ಕೆ ಪಡೆದಿದ್ದಾರೆ.
ಅಭ್ಯರ್ಥಿಗಳಾದ ಬೀದರ್ ಮೂಲದ ಆಕಾಶ ಮಂಠಾಳೆ, ಸಂತೋಷ ಬಂಡೆಪ್ಪ ಯಾಳಗಿ ಮತ್ತು ಬಾಬು ಚಾಂದಶೇಖ್, ಅಭ್ಯರ್ಥಿಗಳಿಗೆ ನೆರವಾಗಲು ಬಂದಿದ್ದ ವಿಜಯಕುಮಾರ ಬಿರಾದಾರ, ಖಾಸಗಿ ಶಾಲೆಯ ಶಿಕ್ಷಕ ಬಾಪು ಗುತ್ತಪ್ಪ ಯಾಳಗಿ ಮತ್ತು ಗಣೇಶ್ ದುಂಡಪ್ಪನನ್ನು ಬಂಧಿಸಿದ್ದ ಅಫಜಲಪುರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.