ಉಗಾರ ಖುರ್ದದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ‘ಅನರ್ಹ ಶಾಸಕರಿಗೆ ರಾಜ್ಯೋತ್ಸವ ಪ್ರಶಸ್ತಿ ಅಥವಾ ಭಾರತ ರತ್ನ ಕೊಡಿಸಬೇಕಿತ್ತಾ? ಶ್ರೀಮಂತ ಪಾಟೀಲಗೆ ವಿಧಾನಸೌಧದ ಒಳಗೆ ಬರುವ ಹಕ್ಕು, ಯೋಗ್ಯತೆ ಮತ್ತು ಅರ್ಹತೆ ಇಲ್ಲ. ಎಷ್ಟೇ ದುಬಾರಿ ಪಾದರಕ್ಷೆ ಇದ್ದರೂ ಅದನ್ನು ದೇವಸ್ಥಾನದ ಒಳಗೆ ಹಾಕಿಕೊಂಡು ಬರುವಂತಿಲ್ಲ. ಹಾಗೆಯೇ, ವಿಧಾನಸೌಧ ಒಂದು ದೇವಾಲಯ. ಪಾದರಕ್ಷೆ ಒಳಗೆ ಬರುವಂತಿಲ್ಲ, ಹೊರಗಡೆಯೇ ಇರಬೇಕು’ ಎಂದು ವಾಗ್ದಾಳಿ ನಡೆಸಿದರು.