‘ಬರಹಗಾರರು ಎಲ್ಲ ಸಂದರ್ಭಗಳಲ್ಲೂ ಮೌನ ವಹಿಸುವುದು ಸಮ್ಮತವಲ್ಲ. ಈಗಂತೂ ಧ್ವನಿಯೆತ್ತಿದರೆ ಸಾಕು, ಯಾವುದಾದರೂ ಒಂದು ಗುಂಪಿಗೆ ಸೇರಿಸಿ ನಮಗೆ ಮುದ್ರೆ ಒತ್ತಿ ಬಿಡುತ್ತಾರೆ. ಎಂ.ಎಂ.ಕಲಬುರ್ಗಿ ಹತ್ಯೆ ನಡೆದಾಗ ನಾನು ಸಾಹಿತ್ಯ ಅಕಾಡೆಮಿಯ ಸಮಿತಿಗೆ ರಾಜೀನಾಮೆ ಕೊಟ್ಟಿದ್ದೆ. ದೇಶದಲ್ಲಿ ಸಂಕಷ್ಟದ ಸಂದರ್ಭ ಎದುರಾದಾಗ ವ್ಯಕ್ತಿಗತವಾಗಿ ನಿರ್ದಿಷ್ಟ ನಿಲುವು ತಳೆಯಬೇಕೇ ವಿನಃ ಬರಹಗಾರರಾಗಿ ಅಲ್ಲ.’ ಎಂದು ಅವರು ಹೇಳಿದರು.