ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-1ರಲ್ಲಿ ರವಿಕುಮಾರ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಶೃಂಗೇರಿ– ಬೆಂಗಳೂರು ಮಾರ್ಗದ ಎ.ಸಿ ಸ್ಲೀಪರ್ ಬಸ್ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅದೇ ಬಸ್ಸಿನಲ್ಲಿ ಕೊಪ್ಪದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ, ಟಿ. ದಾಸರಹಳ್ಳಿ ಬಳಿ ಇಳಿದಿದ್ದರು. ಅವರ ಮಕ್ಕಳು ಇಳಿಯಲು ತಡವಾಗಿತ್ತು. ಅಷ್ಟಕ್ಕೆ ರವಿಕುಮಾರ್ ಜಗಳ ತೆಗೆದು, ಹಲ್ಲೆ ಮಾಡಿದ್ದರು ಎನ್ನಲಾಗಿದೆ.