ಬೆಂಗಳೂರು ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ಕಾರ್ಮಿಕ ಹಕ್ಕುಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಯುದ್ಧ ಸೃಷ್ಟಿಸಿದ ಹಲವು ಸಮಸ್ಯೆಗಳು, ಶ್ರಮಿಕರ ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಮುನ್ನೆಲೆಗೆ ತಂದಿತು. ಆ ಮೂಲಕ ಜಾಗತಿಕ ಬದಲಾವಣೆಗೆ ವೇದಿಕೆ ಕಲ್ಪಿಸಿತು. ನೇಮಕಾತಿ, ಸಮಾನ ವೇತನ, ಕೆಲಸದ ಅವಧಿ ಮುಂತಾದ ಕಾರ್ಮಿಕ ಸ್ನೇಹಿ ನೀತಿಗಳ ಜಾರಿಗೆ ಒತ್ತಾಸೆಯಾಯಿತು’ ಎಂದರು.