‘ಯಾರು ಯಾವ ಪ್ರದೇಶಕ್ಕೆ ಬೇಕಾದರೂ ಹೋಗಿ ನೆಲೆಸುವ, ಉದ್ಯಮ ನಡೆಸುವ ಹಕ್ಕಿನ ಬಗ್ಗೆ 19ನೇ ವಿಧಿಯಲ್ಲಿ ಚರ್ಚಿಸಲಾಗಿದೆ. ಇದು ವಲಸೆಯನ್ನು ಉತ್ತೇಜಿಸುತ್ತಿದೆ. ನಮ್ಮ ರಾಜ್ಯದಲ್ಲಿ ವಲಸಿಗರಿಂದಾಗಿ ಇಲ್ಲಿನ ನೆಲೆಸಿಗರು ಉದ್ಯೋಗಾವಕಾಶ ಕಳೆದುಕೊಳ್ಳುವ ಕಳವಳ ಎದುರಿಸುತ್ತಿದ್ದಾರೆ. ಕನ್ನಡದ ನೆಲ, ಜಲ, ನುಡಿ, ಸಂಸ್ಕೃತಿ, ಅನನ್ಯತೆ, ವೈವಿಧ್ಯಗಳನ್ನುಹೊರಗಿನ ಜನ, ನುಡಿ, ಸಂಸ್ಕೃತಿ, ಆಕ್ರಮಣಗಳಿಂದ ಕಾಪಾಡಿಕೊಳ್ಳುವುದೂ ಸವಾಲಿನ ವಿಷಯ’ ಎಂದರು.