ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಮಲ್ಲು ಕುಂಬಾರ್,‘ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣೆಗಾಗಿ ರಾಜ್ಯ ಟ್ರಾನ್ಸ್ಜೆಂಡರ್ ನೀತಿಯನ್ನು (2017) ಜಾರಿಗೊಳಿಸಲಾಗಿದೆ. ಕಳೆದ ಬಜೆಟ್ನಲ್ಲಿ ₹70 ಲಕ್ಷ ಘೋಷಿಸಿ, ಸಮುದಾಯದ ಸಮೀಕ್ಷೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ. ಆದರೆ, ಇಲಾಖೆಈವರೆಗೆ ಸಮೀಕ್ಷೆಗೆ ಮುಂದಾಗಿಲ್ಲ’ ಎಂದು ದೂರಿದರು.