<p><strong>ಬೆಂಗಳೂರು</strong>: ‘ಮೈಕ್ರೊಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ‘ಮೈಕ್ರೊಫೈನಾನ್ಸ್ ಅಕ್ರಮ ವಿರೋಧಿ ಮಹಿಳೆಯರ ವೇದಿಕೆ’ ಮನವಿ ಸಲ್ಲಿಸಿದೆ.</p>.<p>‘ಮೈಕ್ರೊಫೈನಾನ್ಸ್ಗಳ ನಿಯಂತ್ರಣಕ್ಕೆ ಅಗತ್ಯ ಕಾನೂನನ್ನು ಜಾರಿಗೆ ತರುವುದಾಗಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಹೇಳಿದ್ದೀರಿ. ರಾಜ್ಯದ ಎಲ್ಲ ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಬಿಗಡಾಯಿಸಿದೆ. ಸುಲಭಕ್ಕೆ ಸಾಲ ನೀಡುವ ನೆವದಲ್ಲಿ ಮಹಿಳೆಯರನ್ನು ಅತೀವ ಬಡ್ಡಿಯ ಸಾಲಕ್ಕೆ ಸಿಲುಕಿಸಲಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಬೇಕು’ ಎಂದು ವೇದಿಕೆಯ ವಿ.ಗಾಯತ್ರಿ ಕೋರಿದ್ದಾರೆ.</p>.<p>ಮೈಕ್ರೊಫೈನಾನ್ಸ್ಗಳ ಹಾವಳಿಯ ಬಗ್ಗೆ ಜನವಾದಿ ಮಹಿಳಾ ಸಂಘಟನೆ, ಜಾಗೃತಿ ಸಂಸ್ಥೆ ಮತ್ತು ಆರ್ಎಲ್ಎಚ್ಪಿ ನಡೆಸಿರುವ ಸಮೀಕ್ಷಾ ವರದಿಗಳ ಪ್ರತಿಗಳನ್ನು ವೇದಿಕೆಯು ಸಲ್ಲಿಸಿದೆ.</p>.<p>ಅದನ್ನು ಸ್ವೀಕರಿಸಿದ ಸಚಿವರು, ‘ಮನವಿಯಲ್ಲಿನ ಅಂಶಗಳನ್ನು ಪರಿಶೀಲಿಸಿ’ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮೈಕ್ರೊಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ‘ಮೈಕ್ರೊಫೈನಾನ್ಸ್ ಅಕ್ರಮ ವಿರೋಧಿ ಮಹಿಳೆಯರ ವೇದಿಕೆ’ ಮನವಿ ಸಲ್ಲಿಸಿದೆ.</p>.<p>‘ಮೈಕ್ರೊಫೈನಾನ್ಸ್ಗಳ ನಿಯಂತ್ರಣಕ್ಕೆ ಅಗತ್ಯ ಕಾನೂನನ್ನು ಜಾರಿಗೆ ತರುವುದಾಗಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಹೇಳಿದ್ದೀರಿ. ರಾಜ್ಯದ ಎಲ್ಲ ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಬಿಗಡಾಯಿಸಿದೆ. ಸುಲಭಕ್ಕೆ ಸಾಲ ನೀಡುವ ನೆವದಲ್ಲಿ ಮಹಿಳೆಯರನ್ನು ಅತೀವ ಬಡ್ಡಿಯ ಸಾಲಕ್ಕೆ ಸಿಲುಕಿಸಲಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಬೇಕು’ ಎಂದು ವೇದಿಕೆಯ ವಿ.ಗಾಯತ್ರಿ ಕೋರಿದ್ದಾರೆ.</p>.<p>ಮೈಕ್ರೊಫೈನಾನ್ಸ್ಗಳ ಹಾವಳಿಯ ಬಗ್ಗೆ ಜನವಾದಿ ಮಹಿಳಾ ಸಂಘಟನೆ, ಜಾಗೃತಿ ಸಂಸ್ಥೆ ಮತ್ತು ಆರ್ಎಲ್ಎಚ್ಪಿ ನಡೆಸಿರುವ ಸಮೀಕ್ಷಾ ವರದಿಗಳ ಪ್ರತಿಗಳನ್ನು ವೇದಿಕೆಯು ಸಲ್ಲಿಸಿದೆ.</p>.<p>ಅದನ್ನು ಸ್ವೀಕರಿಸಿದ ಸಚಿವರು, ‘ಮನವಿಯಲ್ಲಿನ ಅಂಶಗಳನ್ನು ಪರಿಶೀಲಿಸಿ’ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>