ಬಿ.ಎಂ. ಕಾಡಯ್ಯ, ರಾಮಚಂದ್ರ ಶೆಟ್ಟಿ, ಸಂತೃಪ್ತ್, ಕೆ.ಶ್ಯಾಮರಾಜು ಅವರ ಸದಸ್ಯತ್ವವನ್ನು ರದ್ದುಗೊಳಿಸಿರುವ ಇಲಾಖೆ, ಆ ಸ್ಥಾನಗಳಿಗೆ ನವೀನ್ ಜೆ.ಎಸ್., ಅಲೋಕ್ ವಿಶ್ವನಾಥ್, ಚೇತನ ಬಿ. ಹಾಗೂ ದಿನೇಶ್ ಸಿಂಘಿ ಅವರನ್ನು ನೇಮಕ ಮಾಡಿದೆ. ದಿನೇಶ್ ಸಿಂಘಿ ಅವರು ಬಳ್ಳಾರಿಯ ಭಾರತ್ ಮೈನ್ಸ್ ಆ್ಯಂಡ್ ಮಿನರಲ್ಸ್ನ (ಬಿಎಂಎಂ) ಮಾಲೀಕರು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಈ ನೇಮಕ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡವು ರಾಜ್ಯ ಸರ್ಕಾರಕ್ಕೆ 2011ರಲ್ಲಿ ಎರಡನೇ ವರದಿ ಸಲ್ಲಿಸಿತ್ತು. 16,368 ಟನ್ ಅದಿರು ಸಾಗಣೆಗೆ ಅನುಮತಿ ಪಡೆದಿದ್ದ ಬಿಎಂಎಂ ಸಂಸ್ಥೆಯು 1,27,566 ಟನ್ ಅದಿರನ್ನು ನಿಯಮಬಾಹಿರವಾಗಿ ಸಾಗಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.