‘ಸರ್ಕಾರದ ಸ್ಪಂದನೆ ಜತೆಗೆ ಜ.1ರಂದು ಬೋಧನೆಗೆ ಹಾಜರಾಗುವಂತೆ ಮಾಡಿದ ಮನವಿಗೆ ಓಗೊಟ್ಟು ಈಗಾಗಲೇ 3,200 ಅತಿಥಿ ಉಪನ್ಯಾಸಕರು ಕೆಲಸಕ್ಕೆ ಮರಳಿದ್ದಾರೆ. ಕೆಲವರು ಸೇವಾಭದ್ರತೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಜ.6ರವರೆಗೂ ಕಾಯುತ್ತೇವೆ. ಈಗಾಗಲೇ ಅಧಿಕಾರಿಗಳು, ಪ್ರಾಂಶುಪಾಲರ ಜತೆ ಸಭೆ ನಡೆಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದಿನ ವಾರದಿಂದಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.