<p><strong>ರಾಯಚೂರು/ಧಾರವಾಡ</strong>: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನಿ ಆರ್ಡರ್ ಮೂಲಕ ಹಣ ಕಳಿಸುವ ಚಳವಳಿಗೆ ಸೋಮವಾರ ಚಾಲನೆ ನೀಡಿದರು.</p>.<p>ರಾಯಚೂರಿನಲ್ಲಿ‘ಮದ್ಯ ನಿಷೇಧ ಆಂದೋಲನ’ದ ಆರು ಮಂದಿ ಸದಸ್ಯರು ಕೇಂದ್ರ ಅಂಚೆ ಕಚೇರಿಗೆ ತೆರಳಿ ತಲಾ₹ 50 ಮನಿ ಆರ್ಡರ್ ಮಾಡಿದರು. ಸಂಘಟನೆ ಸಂಚಾಲಕಿ ವಿದ್ಯಾ ಪಾಟೀಲ, ಪದಾಧಿಕಾರಿಗಳಾದ ಶೋಭಾ, ಮಾಳಮ್ಮ, ಗುರುರಾಜ, ಬಸವರಾಜ ಇದ್ದರು.</p>.<p>‘ಲಾಕ್ಡೌನ್ನಲ್ಲಿ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ಮಹಿಳೆಯರು, ಮಕ್ಕಳು ನೆಮ್ಮದಿಯಾಗಿದ್ದರು. ಈಗ ಆದಾಯದ ನೆಪ ಹೇಳಿ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ’ ಎಂದು ಟೀಕಿಸಿದರು.</p>.<p>ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿಯೂಗ್ರಾಮೀಣ ಕೂಲಿಕಾರ್ಮಿಕರ ಸಂಘದ ಜಿಲ್ಲಾ ಸಂಯೋಜಕಿ ಸಪ್ನಾ ಭಾವಿಮನಿ ನೇತೃತ್ವದಲ್ಲಿ ‘ಮನಿ ಆರ್ಡರ್’ ಕಳಿಸುವ ಚಳವಳಿ ನಡೆಯಿತು.</p>.<p>ಧಾರವಾಡ ವರದಿ:ಹೋರಾಟಗಾರ್ತಿ ಶಾರದಾ ದಾಬಡೆ ನೇತೃತ್ವದಲ್ಲಿ ಜಿಲ್ಲೆಯ ಮಹಿಳೆಯರು ಸಮೀಪದ ಅಂಚೆ ಕಚೇರಿಯಲ್ಲಿ ಸಿ.ಎಂಗೆ ತಲಾ ₹10, ₹20 ಮನಿ ಆರ್ಡರ್ ಮಾಡಿ, ಮದ್ಯ ನಿಷೇಧದ ಫಲಕ ಪ್ರದರ್ಶಿಸಿ ಒತ್ತಾಯಿಸಿದರು.</p>.<p>ಈ ಕುರಿತು ಮಾತನಾಡಿದ ಶಾರದಾ ದಾಬಡೆ,‘ಮದ್ಯ ಮಾರಾಟಕ್ಕೆ ಅವಕಾಶ ನೀಡುವುದರಿಂದ ಅಪರಾಧ ಪ್ರಕರಣ, ದೌರ್ಜನ್ಯ ಹೆಚ್ಚಲಿದೆ. ಆದಾಯವಿಲ್ಲದೆ ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿಗಳಿಗೆ ಅಡವು ಇಡುತ್ತಿದ್ದಾರೆ. ಹೀಗಾಗಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದರು.</p>.<p>‘ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನೆ ಮಾಡುವುದು ಈ ಪ್ರತಿಭಟನೆಯ ಉದ್ದೇಶ‘ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು/ಧಾರವಾಡ</strong>: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನಿ ಆರ್ಡರ್ ಮೂಲಕ ಹಣ ಕಳಿಸುವ ಚಳವಳಿಗೆ ಸೋಮವಾರ ಚಾಲನೆ ನೀಡಿದರು.</p>.<p>ರಾಯಚೂರಿನಲ್ಲಿ‘ಮದ್ಯ ನಿಷೇಧ ಆಂದೋಲನ’ದ ಆರು ಮಂದಿ ಸದಸ್ಯರು ಕೇಂದ್ರ ಅಂಚೆ ಕಚೇರಿಗೆ ತೆರಳಿ ತಲಾ₹ 50 ಮನಿ ಆರ್ಡರ್ ಮಾಡಿದರು. ಸಂಘಟನೆ ಸಂಚಾಲಕಿ ವಿದ್ಯಾ ಪಾಟೀಲ, ಪದಾಧಿಕಾರಿಗಳಾದ ಶೋಭಾ, ಮಾಳಮ್ಮ, ಗುರುರಾಜ, ಬಸವರಾಜ ಇದ್ದರು.</p>.<p>‘ಲಾಕ್ಡೌನ್ನಲ್ಲಿ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ಮಹಿಳೆಯರು, ಮಕ್ಕಳು ನೆಮ್ಮದಿಯಾಗಿದ್ದರು. ಈಗ ಆದಾಯದ ನೆಪ ಹೇಳಿ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ’ ಎಂದು ಟೀಕಿಸಿದರು.</p>.<p>ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿಯೂಗ್ರಾಮೀಣ ಕೂಲಿಕಾರ್ಮಿಕರ ಸಂಘದ ಜಿಲ್ಲಾ ಸಂಯೋಜಕಿ ಸಪ್ನಾ ಭಾವಿಮನಿ ನೇತೃತ್ವದಲ್ಲಿ ‘ಮನಿ ಆರ್ಡರ್’ ಕಳಿಸುವ ಚಳವಳಿ ನಡೆಯಿತು.</p>.<p>ಧಾರವಾಡ ವರದಿ:ಹೋರಾಟಗಾರ್ತಿ ಶಾರದಾ ದಾಬಡೆ ನೇತೃತ್ವದಲ್ಲಿ ಜಿಲ್ಲೆಯ ಮಹಿಳೆಯರು ಸಮೀಪದ ಅಂಚೆ ಕಚೇರಿಯಲ್ಲಿ ಸಿ.ಎಂಗೆ ತಲಾ ₹10, ₹20 ಮನಿ ಆರ್ಡರ್ ಮಾಡಿ, ಮದ್ಯ ನಿಷೇಧದ ಫಲಕ ಪ್ರದರ್ಶಿಸಿ ಒತ್ತಾಯಿಸಿದರು.</p>.<p>ಈ ಕುರಿತು ಮಾತನಾಡಿದ ಶಾರದಾ ದಾಬಡೆ,‘ಮದ್ಯ ಮಾರಾಟಕ್ಕೆ ಅವಕಾಶ ನೀಡುವುದರಿಂದ ಅಪರಾಧ ಪ್ರಕರಣ, ದೌರ್ಜನ್ಯ ಹೆಚ್ಚಲಿದೆ. ಆದಾಯವಿಲ್ಲದೆ ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿಗಳಿಗೆ ಅಡವು ಇಡುತ್ತಿದ್ದಾರೆ. ಹೀಗಾಗಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದರು.</p>.<p>‘ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನೆ ಮಾಡುವುದು ಈ ಪ್ರತಿಭಟನೆಯ ಉದ್ದೇಶ‘ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>