ಮೈಸೂರು: ಫಿರಂಗಿಯ ನಳಿಕೆಯಿಂದ ಕಿವಿಗಡಚಿಕ್ಕುವ ಶಬ್ದದೊಂದಿಗೆ ಬೆಂಕಿಯುಗುಳುತ್ತಾ ಕುಶಾಲತೋಪು ಸಿಡಿಯುತ್ತಿದ್ದಂತೆ, ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಹಾಗೂ ಅದಕ್ಕೆ ಸಾಥ್ ನೀಡಲಿರುವ ಧನಂಜಯ, ವಿಕ್ರಮ, ಕಾವೇರಿ, ಚೈತ್ರಾ ಆನೆಗಳು ಕೊಂಚವೂ ಬೆದರಲಿಲ್ಲ. ಬದಲಿಗೆ ರಾಜಗಾಂಭೀರ್ಯದಿಂದ ನಿಂತಲ್ಲೇ ನಿಂತು ದಿಟ್ಟಿಸಿದವು. ಗಜಪಡೆಯ ಮೂರು ಆನೆಗಳು ಮಾತ್ರ ಬೆಚ್ಚಿ ಘೀಳಿಟ್ಟವು. ಕೆಲವು ಕುದುರೆಗಳು ಕೆನೆದವು.