ಬೆಂಗಳೂರು: ಕಾಂಗ್ರೆಸ್ನವರು ನಾಲ್ಕು ವರ್ಷ ಅಧಿಕಾರದಿಂದ ದೂರವಿದ್ದು, ಒಂದು ರೀತಿ ಹಸಿದ ಹುಲಿಗಳಾಗಿದ್ದಾರೆ. ಆದ್ದರಿಂದ ಎಲ್ಲರೂ ಹಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ದೂರಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗುತ್ತಿಗೆದಾರರೇ ರಾಜ್ಯ ಸರ್ಕಾರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತ್ಯವನ್ನೇ ನುಡಿಯುತ್ತಿದ್ದಾರೆ. ಈ ಸರ್ಕಾರ ನೂರಕ್ಕೆ ನೂರರಷ್ಟು ಭ್ರಷ್ಟ ಎಂಬುದನ್ನೇ ಅವರದೇ ಪಕ್ಷದವರು ಹೇಳುತ್ತಿದ್ದಾರೆ ಎಂದರು.
ಕೇವಲ ಎರಡು ತಿಂಗಳಲ್ಲೇ ಸರ್ಕಾರ ಅಧಃಪತನಕ್ಕೆ ತಲುಪಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಬೇರೆಯವರ ಮಾತು ಹೋಗಲಿ ಮುಖ್ಯಮಂತ್ರಿಯವರೇ ತಮ್ಮ ಆಪ್ತರ ಬಳಿ ಎರಡೇ ತಿಂಗಳಲ್ಲಿ ನಮ್ಮ ಸರ್ಕಾರದ ಹೆಸರು ಖರಾಬಾಗುತ್ತಿದೆ ಎಂದಿರುವುದು ಗೊತ್ತಾಗಿದೆ ಎಂದು ರವಿಕುಮಾರ್ ತಿಳಿಸಿದರು.