ಶನಿವಾರವೂ ಕಾರ್ಕಳ ಹಾಗೂ ಕೊಡಗು ಜಿಲ್ಲೆಯ ವಯನಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಭಾಗಗಳಾದ ಕುಟ್ಟ, ಕರಿಕೆ, ಮಾಕುಟ್ಟ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ. ಬಿರುನಾಣಿ, ನಾಲಾಡಿ, ಉಡುಂಬೆ, ಹಾಲಾಡಿ, ಕರಿಕೆ, ಪೇರೂರು, ಸಂಪಾಜೆ ಅರಣ್ಯ ಪ್ರದೇಶದಲ್ಲಿ ಎಎನ್ಎಫ್ ಸಿಬ್ಬಂದಿ ಶೋಧ ನಡೆಸಿದರು.