ವಿಧಾನಪರಿಷತ್ನಲ್ಲಿ ಮಂಗಳವಾರ ಬಿಜೆಪಿಯ ಹಣಮಂತ ನಿರಾಣಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘1.33 ಲಕ್ಷ ಎಕರೆ ಭೂಮಿಯ ಸ್ವಾಧೀನ ಮಾಡಬೇಕಾಗಿದೆ. ಪ್ರಸ್ತುತ 27 ಸಾವಿರ ಎಕರೆ ವಶಪಡಿಸಿಕೊಳ್ಳಲಾಗಿದೆ. ಬೊಮ್ಮಾಯಿ ಅವರು ಮಂಡಿಸಿದ್ದ ಬಜೆಟನ್ನೇ ಸ್ವಲ್ಪ ಮಾರ್ಪಾಡು ಮಾಡಿದ್ದೇವೆ. ಹಾಗಾಗಿ, ಉಳಿದ ಭೂಸ್ವಾಧೀನಕ್ಕೆ ಹಣ ನೀಡಲು ಸಾಧ್ಯವಿಲ್ಲ. ಭೂಸ್ವಾಧೀನ ದರ ಅಧಿಕವಾಗಿ ನಮೂದಿಸಿರುವುದೂ ಸಮಸ್ಯೆಗೆ ಕಾರಣ. ಕೇಂದ್ರ ಜಲಶಕ್ತಿ ಸಚಿವರನ್ನು ಈಚೆಗೆ ಭೇಟಿ ಮಾಡಿ ಬಾಕಿ ಇರುವ ಅಧಿಸೂಚನೆ ಹೊರಡಿಸಲು ಕೋರಿದ್ದೇವೆ’ ಎಂದರು.