ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಪಿಎಂಎಫ್‌ಎಂಇ ಯೋಜನೆ 1 ವರ್ಷ ವಿಸ್ತರಣೆ: ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ

Published : 5 ಜುಲೈ 2025, 23:30 IST
Last Updated : 5 ಜುಲೈ 2025, 23:30 IST
ಫಾಲೋ ಮಾಡಿ
Comments
ಪಿಎಂಎಫ್‌ಎಂಇ ಯೋಜನೆಗೆ ಕರ್ನಾಟಕ ಸರ್ಕಾರ ಶೇ 15ರಷ್ಟು ಟಾಪ್‌ಅಪ್‌ ಸೌಲಭ್ಯ ಕಲ್ಪಿಸಿದೆ. ಅಲ್ಲದೆ ಬಜೆಟ್‌ನಲ್ಲಿ ₹ 206 ಕೋಟಿ ಕಾಯ್ದಿರಿಸಲಾಗಿದೆ
ಎನ್‌. ಚಲುವರಾಯಸ್ವಾಮಿ ಕೃಷಿ ಸಚಿವ
ಸೋಮವಾರದಿಂದ ಪ್ರಕ್ರಿಯೆ ಶುರು
‘ಕಿರು ಆಹಾರ ಸಂಸ್ಕರಣಾ ಉದ್ದಿಮೆ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು. ‘ಉದ್ದಿಮೆ ಸ್ಥಾಪಿಸಿ ಸಹಾಯಧನ ಪಡೆಯಲು 18 ವರ್ಷ ತುಂಬಿರಬೇಕು. ಜಿಲ್ಲಾಸಂಪನ್ಮೂಲ ವ್ಯಕ್ತಿಗಳು ಆಸಕ್ತರಿಗೆ ಡಿಪಿಆರ್‌ ಸಿದ್ಧಪಡಿಸುವುದರಿಂದ ಹಿಡಿದು ಸಾಲ ಮಂಜೂರಾಗಿ ಸಬ್ಸಿಡಿ ಪಡೆಯುವವರೆಗೆ ನೆರವಾಗಲಿದ್ದಾರೆ’ ಎಂದು ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್‌ ತಿಳಿಸಿದರು. ‘ಮೈಸೂರಿನ ಸಿಎಫ್‌ಟಿಆರ್‌ಐ ಎರಡು ದಿನದ ತರಬೇತಿ ನೀಡಿ ನಂತರ ನಡೆಯುವ ಪರೀಕ್ಷೆಯಲ್ಲಿ ಅರ್ಹರಾದವರನ್ನು ಜಿಲ್ಲಾ ಸಂಪನ್ಮೂಲ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತದೆ. ಐದು ವರ್ಷಗಳಿಂದ 400 ಮಂದಿ ಜಿಲ್ಲಾ ಸಂಪನ್ಮೂಲ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರಸಕ್ತ ವರ್ಷದಲ್ಲಿ 5 ಸಾವಿರ ಫಲಾನುಭವಿಗಳಿಗೆ ನೆರವು ಕಲ್ಪಿಸಬೇಕಾದ ಕಾರಣ ಹೆಚ್ಚುವರಿಯಾಗಿ 150 ಮಂದಿಯನ್ನು ನಿಯೋಜಿಸಿಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT