ಪ್ರಕರಣವೇನು?: ಪೋಕ್ಸೊ ಪ್ರಕರಣದಲ್ಲಿ ಶರಣರ ಬಂಧನವಾದ ನಂತರ, ‘ಸುಳ್ಳು ಕೇಸು ದಾಖಲಿಸಲು ಸಂತ್ರಸ್ತ ಬಾಲಕಿಗೆ ಅಥಣಿ ತಾಲ್ಲೂಕಿನ ಜುಂಜರವಾಡ ಗ್ರಾಮದ ನಿವಾಸಿಯಾದ ಮಠದ ಶಾಲಾ ಶಿಕ್ಷಕ ಬಸವರಾಜೇಂದ್ರ ಮತ್ತು ಗಾಯತ್ರಿ ಪ್ರಚೋದನೆ ನೀಡಿದ್ದಾರೆ‘ ಎಂಬ ಆರೋಪದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಬಸವರಾಜೇಂದ್ರ ಅವರನ್ನು ಪೊಲೀಸರು ನವೆಂಬರ್ 10ರಂದು ಬಂಧಿಸಿದ್ದರು.