ತುಮಕೂರು: ಇಲ್ಲಿನ ಜಯನಗರ ಠಾಣೆ ಸಬ್ಇನ್ಸ್ಪೆಕ್ಟರ್ ನವೀನ್ ಅವರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನ ಹೊಸಗುಡ್ಡದಹಳ್ಳಿಯ ದಿಲೀಪ್ ಕುಮಾರ್ (27), ಕಲಾಸಿಪಾಳ್ಯದ ಸಂತೋಷ್ (23), ಕೆ.ಆರ್.ಮಾರುಕಟ್ಟೆಯ ವಿತ್ತೇಶ್ (21), ಮುರುಗನ್ (24) ಎಂಬುವವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.