ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ರೈಗೆ ‘ರಂಗ ಗೌರವ ಪುರಸ್ಕಾರ’

Published 11 ಅಕ್ಟೋಬರ್ 2023, 14:16 IST
Last Updated 11 ಅಕ್ಟೋಬರ್ 2023, 14:16 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ಸಾಲಿನ ‘ರಂಗ ಗೌರವ ಪುರಸ್ಕಾರ’ಕ್ಕೆ ರಂಗಕರ್ಮಿ ಎ.ನಾರಾಯಣ ರೈ ಆಯ್ಕೆಯಾಗಿದ್ದು, ರಂಗಾಯಣದ ‘ನವರಾತ್ರಿ ರಂಗೋತ್ಸವ’ ಉದ್ಘಾಟನೆ ದಿನವಾದ ಅ.15ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌. ತಂಗಡಗಿ ಪ್ರದಾನ ಮಾಡಲಿದ್ದಾರೆ.

ಭೂತಕೋಲ, ಯಕ್ಷಗಾನ, ಬಯಲಾಟದ ಜೊತೆ ರಂಗಭೂಮಿಗೆ ಸಲ್ಲಿಸಿದ ಕೊಡುಗೆ ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ₹ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ ಎಂದು ರಂಗಾಯಣದ ಪ್ರಕಟಣೆ ತಿಳಿಸಿದೆ.

ಕಾಸರಗೋಡಿನ ಏವುಂಜೆ ಗ್ರಾಮದವರಾದ ಅವರು ಹುಣಸೂರಿನ ತಂಬಾಕು ಸಂಶೋಧನಾ ಮಂಡಳಿಯಲ್ಲಿ ನೌಕರರಾಗಿದ್ದುಕೊಂಡೇ ರಂಗಭೂಮಿಯನ್ನು ಕಟ್ಟಿದರು. ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಆಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 8 ಎಕರೆ ಜಮೀನನ್ನು ಖರೀದಿಸಲು ನೆರವಾದರು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT