‘ಯೋಜನೆ ಅನುಷ್ಠಾನಕ್ಕೆ ರಾಜ್ಯದ ಬಳಿ ಹಣ ಇಲ್ಲವೆಂದೇನೂ ಅಲ್ಲ. ಆದರೆ ಅದರ ಪ್ರಾತಿನಿಧ್ಯ ಬೇರೆಯೇ ಇದೆ. ನದಿಪಾತ್ರದ ಮೇಲಿನ ಪ್ರದೇಶದಲ್ಲಿರುವ ನಾವು, ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ, ಮುಂದೊಂದು ದಿನ ಅತ್ತ ಹರಿದುಹೋದ ನೀರಿನ ಮೇಲೆ ನೆರೆಯ ರಾಜ್ಯಗಳು ಹಕ್ಕು ಸಾಧಿಸುವ ಅಪಾಯವಿದೆ’ ಎಂದರು.