ಆ. 15, 16ರಂದು ಸುರಿದ ಮಹಾಮಳೆಗೆ ಮಕ್ಕಂದೂರು, ಮಾದಾಪುರ, ಎಮ್ಮೆತ್ತಾಳ, ತಂತಿಪಾಲ, ಮುಕ್ಕೋಡ್ಲು, ಉದಯಗಿರಿಯಲ್ಲಿ ಭೂಕುಸಿತ ಉಂಟಾಗಿ ಹಲವು ಮನೆಗಳು ಕುಸಿದಿದ್ದವು. ಪೋಷಕರೊಂದಿಗೆ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳೂ ಪರಿಹಾರ ಕೇಂದ್ರ ಸೇರಿದ್ದರು. ಪರಿಹಾರ ಕೇಂದ್ರ ಸಮೀಪದ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿತ್ತು.