ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಣ್ಣಗೆ ಸೂಕ್ತ ಸ್ಥಾನಮಾನ ಸಿಗಬಹುದು: ಮುನಿರತ್ನ

Published 9 ಅಕ್ಟೋಬರ್ 2023, 17:26 IST
Last Updated 9 ಅಕ್ಟೋಬರ್ 2023, 17:26 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಬಹುದು ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.

ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ಟೀಕಿಸಿರುವುದನ್ನು ಪ್ರಸ್ತಾಪಿಸಿದ ಮುನಿರತ್ನ, ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದಾಗ ಏಕೆ ಪ್ರಶ್ನಿಸಲಿಲ್ಲ. ಈಗ ಅವರು ಹೈಕಮಾಂಡ್‌ ನಮ್ಮ ಮಾತು ಕೇಳಬೇಕಿತ್ತು ಎನ್ನುತ್ತಾರೆ. ಆಗ ಅವರು ಯಾಕೆ ಈ ಮಾತು ಹೇಳದೇ ಸುಮ್ಮನಿದ್ದರು’ ಎಂದು ಪ್ರಶ್ನಿಸಿದರು.

ಮೈತ್ರಿ ಬಗ್ಗೆ ಹೈಕಮಾಂಡ್‌ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ನೆಂಟರು ಜಾಸ್ತಿಯಾಗಿದ್ದಾರೆ. ಆದರೆ ಅಕ್ಕಿ ಕಡಿಮೆ ಇದೆ. ಐದು ಕೆ.ಜಿ ಅಕ್ಕಿಯಾದರೂ ಸಿಗುತ್ತದಾ ಎಂದು ಲೆಟರ್‌ ಹೆಡ್‌ ಹಿಡಿದು ನಿಂತಿದ್ದಾರೆ. ಅಲ್ಲಿ ಸಿಕ್ಕಿಲ್ಲಾ ಎಂದರೆ, ಪಕ್ಕದ ಮನೆಯಲ್ಲಾದರೂ ಸಿಗುತ್ತದಾ ಎಂದು ಕಾದು ನಿಂತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT