ಶಾಸಕ ಎಸ್.ಟಿ.ಸೋಮಶೇಖರ್ ಅವರು ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಟೀಕಿಸಿರುವುದನ್ನು ಪ್ರಸ್ತಾಪಿಸಿದ ಮುನಿರತ್ನ, ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದಾಗ ಏಕೆ ಪ್ರಶ್ನಿಸಲಿಲ್ಲ. ಈಗ ಅವರು ಹೈಕಮಾಂಡ್ ನಮ್ಮ ಮಾತು ಕೇಳಬೇಕಿತ್ತು ಎನ್ನುತ್ತಾರೆ. ಆಗ ಅವರು ಯಾಕೆ ಈ ಮಾತು ಹೇಳದೇ ಸುಮ್ಮನಿದ್ದರು’ ಎಂದು ಪ್ರಶ್ನಿಸಿದರು.