ಬೆಂಗಳೂರು: ಕಳೆದ ಎರಡು ವರ್ಷ ಜಗತ್ತನ್ನು ಕಾಡಿದ ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರವು ₹15,645 ಕೋಟಿ ಖರ್ಚು ಮಾಡಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದಿದ್ಧಾರೆ.
Not many would know that our State government spent a whopping Rs 15,645 crore to fight Covid in the last two years.
Chief Minister Basavaraj Bommai disclosed this during his reply to Budget 2022-23 discussions in the Legislative Assembly today. 2/2#Covid_19#Karnataka
ಕೋವಿಡ್ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ ಮತ್ತು ಅದರ ವಿರುದ್ಧದ ನಮ್ಮ ಹೋರಾಟವೂ ದೊಡ್ಡದಾಗಿತ್ತು. ಅದರ ವಿರುದ್ಧದ ಹೋರಾಟಕ್ಕೆ ಅಧಿಕ ಪ್ರಮಾಣದ ಸಂಪನ್ಮೂಲದ ಬಳಕೆಯೂ ಮಾಡಬೇಕಾಯಿತು ಎಂದು ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಲಕ್ಷಾಂತರ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸಿಬ್ಬಂದಿ ಎರಡು ವರ್ಷಗಳ ಕಾಲ ಹಗಲಿರುಳೆನ್ನದೆ ಶ್ರಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.