‘ಪ್ರಜಾವಾಣಿ’ಯಿಂದ ಬಂದಿದ್ದ ಶಿಷ್ಯವೇತನವನ್ನು ಬಸ್ಪಾಸ್ ಪಡೆಯುವುದಕ್ಕೆ ಹಾಗೂ ಅಗತ್ಯ ಪರಿಕರ ಖರೀದಿಗೆ ಬಳಸಿಕೊಂಡಿದ್ದೇನೆ. ಶಿಷ್ಯವೇತನದಿಂದ ಅನುಕೂಲವಾಗಿದೆ. ಶೈಕ್ಷಣಿಕವಾಗಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
–ವಿನಯಕುಮಾರ ಸಿರವಾರ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ
ಪುಸ್ತಕ ಖರೀದಿಸಿದೆ
‘ಪ್ರಜಾವಾಣಿ’ ಶಿಷ್ಯವೇತನ ಬಂದಾಗ ಬಹಳ ಖುಷಿಯಾಯಿತು. ಈ ಹಣವನ್ನು ಪುಸ್ತಕ ಖರೀದಿಸಲು ಉಪಯೋಗಿಸಿದೆ. ಶಿಷ್ಯವೇತನ ಪಡೆದು ಓದುತ್ತಿರುವುದರಿಂದ ಹೆಚ್ಚು ಅಂಕ ಪಡೆಯಬೇಕೆಂಬ ಕನಸು ಇದೆ. ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸಿದ್ದೇನೆ.
–ಮೋನಿಕಾ ಕೆ.ಎಸ್. ಅದಲಗೆರೆ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ