<p><strong>ಬೆಂಗಳೂರು:</strong>ಮಾನವ-ಚಿರತೆ ಸಂಘರ್ಷ ಕಡಿಮೆಗೊಳಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ರೂಪಿಸಿರುವ ಮಾರ್ಗಸೂಚಿಗಳು ತನ್ನ ಪ್ರಮುಖ ಉದ್ದೇಶಗಳನ್ನು ಸಾಧಿಸಲು ವಿಫಲವಾಗಿವೆ. ಚಿರತೆ ಸೆರೆಹಿಡಿಯುವ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲಎಂದು ಅಧ್ಯಯನವೊಂದು ಹೇಳಿದೆ.</p>.<p>ನೇಚರ್ ಫೌಂಡೇಷನ್ ಕನ್ಸರ್ವೇಷನ್ ಫೌಂಡೇಷನ್ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ. ಅಧ್ಯಯನ ವರದಿಯು ‘ಪಾಲಿಸಿ ಟು ಆನ್-ಗ್ರೌಂಡ್ ಆಕ್ಷನ್: ಎವಲ್ಯೂಏಟಿಂಗ್ ಎ ಕಾನ್ಫ್ಲಿಕ್ಟ್ ಪಾಲಿಸಿ ಗೈಡ್ಲೈನ್ ಫಾರ್ ಲೆಪರ್ಡ್ಸ್ ಇನ್ ಇಂಡಿಯಾ' ಎಂಬ ಶೀರ್ಷಿಕೆಯಡಿ ‘ಜರ್ನಲ್ ಆಫ್ ಇಂಟರ್ನ್ಯಾಷನಲ್ ವೈಲ್ಡ್ಲೈಫ್ ಲಾ ಆ್ಯಂಡ್ ಪಾಲಿಸಿ’ಯಲ್ಲಿ ಪ್ರಕಟವಾಗಿದೆ.</p>.<p>‘ಮಾನವ-ಚಿರತೆ ನಿರ್ವಹಣೆಗಾಗಿ ಮಾರ್ಗಸೂಚಿಗಳು’ ಎಂಬ ಕಾರ್ಯನೀತಿಯನ್ನು 2010ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡಲಾಗಿದೆ.ರಾಜ್ಯದಲ್ಲಿ 2009-2016ರಲ್ಲಿ 357 ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಶೇ 79ರಷ್ಟು ಚಿರತೆಗಳನ್ನುಮೈಸೂರು, ಉಡುಪಿ, ಹಾಸನ, ತುಮಕೂರು, ರಾಮನಗರ, ಬಳ್ಳಾರಿ, ಕೊಪ್ಪಳ ಮತ್ತು ಮಂಡ್ಯ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ.</p>.<p>ಹೀಗೆಸೆರೆಹಿಡಿದ ಶೇ 85.4ರಷ್ಟು (268) ಚಿರತೆಗಳನ್ನು ಇತರ ಅರಣ್ಯಗಳಿಗೆ ಸ್ಥಳಾಂತರಿಸಲಾಗಿದೆ. ಶೇ 10.8ರಷ್ಟು (34) ಚಿರತೆಗಳನ್ನು ಮೃಗಾಲಯ ಅಥವಾ ಪುನರ್ವಸತಿ ಕೇಂದ್ರಗಳಿಗೆ ತೆಗೆದುಕೊಂಡು ಹೋಗಲಾಗಿದೆ ಮತ್ತು ಶೇ 3.8ರಷ್ಟು ಅಂದರೆ, 12 ಚಿರತೆಗಳು ಸೆರೆಹಿಡಿಯುವ ಸಂದರ್ಭದಲ್ಲಿ ಮೃತಪಟ್ಟಿವೆ.</p>.<p>ಕೇಂದ್ರ ಸರ್ಕಾರ ಈ ಕುರಿತು ನಿಯಮಾವಳಿ ರೂಪಿಸಿದ ನಂತರ, ಚಿರತೆ ಹಿಡಿಯುವ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಚಿರತೆಗಳನ್ನು ಸ್ಥಳಾಂತರಿಸುವ ಪ್ರಮಾಣ ಕೂಡ ಮೂರು ಪಟ್ಟು ಹೆಚ್ಚಾಗಿರುವುದನ್ನು ನೋಡಿದರೆ, ಈನಿಯಮಾವಳಿಗಳಿಂದ ಯಾವುದೇ ಸಕಾರಾತ್ಮಕ ಪರಿಣಾಮವಾಗಿಲ್ಲ ಎಂದು ಅಧ್ಯಯನ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಮಾನವ-ಚಿರತೆ ಸಂಘರ್ಷ ಕಡಿಮೆಗೊಳಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ರೂಪಿಸಿರುವ ಮಾರ್ಗಸೂಚಿಗಳು ತನ್ನ ಪ್ರಮುಖ ಉದ್ದೇಶಗಳನ್ನು ಸಾಧಿಸಲು ವಿಫಲವಾಗಿವೆ. ಚಿರತೆ ಸೆರೆಹಿಡಿಯುವ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲಎಂದು ಅಧ್ಯಯನವೊಂದು ಹೇಳಿದೆ.</p>.<p>ನೇಚರ್ ಫೌಂಡೇಷನ್ ಕನ್ಸರ್ವೇಷನ್ ಫೌಂಡೇಷನ್ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ. ಅಧ್ಯಯನ ವರದಿಯು ‘ಪಾಲಿಸಿ ಟು ಆನ್-ಗ್ರೌಂಡ್ ಆಕ್ಷನ್: ಎವಲ್ಯೂಏಟಿಂಗ್ ಎ ಕಾನ್ಫ್ಲಿಕ್ಟ್ ಪಾಲಿಸಿ ಗೈಡ್ಲೈನ್ ಫಾರ್ ಲೆಪರ್ಡ್ಸ್ ಇನ್ ಇಂಡಿಯಾ' ಎಂಬ ಶೀರ್ಷಿಕೆಯಡಿ ‘ಜರ್ನಲ್ ಆಫ್ ಇಂಟರ್ನ್ಯಾಷನಲ್ ವೈಲ್ಡ್ಲೈಫ್ ಲಾ ಆ್ಯಂಡ್ ಪಾಲಿಸಿ’ಯಲ್ಲಿ ಪ್ರಕಟವಾಗಿದೆ.</p>.<p>‘ಮಾನವ-ಚಿರತೆ ನಿರ್ವಹಣೆಗಾಗಿ ಮಾರ್ಗಸೂಚಿಗಳು’ ಎಂಬ ಕಾರ್ಯನೀತಿಯನ್ನು 2010ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡಲಾಗಿದೆ.ರಾಜ್ಯದಲ್ಲಿ 2009-2016ರಲ್ಲಿ 357 ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಶೇ 79ರಷ್ಟು ಚಿರತೆಗಳನ್ನುಮೈಸೂರು, ಉಡುಪಿ, ಹಾಸನ, ತುಮಕೂರು, ರಾಮನಗರ, ಬಳ್ಳಾರಿ, ಕೊಪ್ಪಳ ಮತ್ತು ಮಂಡ್ಯ ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ.</p>.<p>ಹೀಗೆಸೆರೆಹಿಡಿದ ಶೇ 85.4ರಷ್ಟು (268) ಚಿರತೆಗಳನ್ನು ಇತರ ಅರಣ್ಯಗಳಿಗೆ ಸ್ಥಳಾಂತರಿಸಲಾಗಿದೆ. ಶೇ 10.8ರಷ್ಟು (34) ಚಿರತೆಗಳನ್ನು ಮೃಗಾಲಯ ಅಥವಾ ಪುನರ್ವಸತಿ ಕೇಂದ್ರಗಳಿಗೆ ತೆಗೆದುಕೊಂಡು ಹೋಗಲಾಗಿದೆ ಮತ್ತು ಶೇ 3.8ರಷ್ಟು ಅಂದರೆ, 12 ಚಿರತೆಗಳು ಸೆರೆಹಿಡಿಯುವ ಸಂದರ್ಭದಲ್ಲಿ ಮೃತಪಟ್ಟಿವೆ.</p>.<p>ಕೇಂದ್ರ ಸರ್ಕಾರ ಈ ಕುರಿತು ನಿಯಮಾವಳಿ ರೂಪಿಸಿದ ನಂತರ, ಚಿರತೆ ಹಿಡಿಯುವ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಚಿರತೆಗಳನ್ನು ಸ್ಥಳಾಂತರಿಸುವ ಪ್ರಮಾಣ ಕೂಡ ಮೂರು ಪಟ್ಟು ಹೆಚ್ಚಾಗಿರುವುದನ್ನು ನೋಡಿದರೆ, ಈನಿಯಮಾವಳಿಗಳಿಂದ ಯಾವುದೇ ಸಕಾರಾತ್ಮಕ ಪರಿಣಾಮವಾಗಿಲ್ಲ ಎಂದು ಅಧ್ಯಯನ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>