ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಮತ್ತು ಆದರ್ಶ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ಪಾವತಿಗೆ ₹359 ಕೋಟಿ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದಿಂದ ಸಕಾಲಕ್ಕೆ ಅನುದಾನ ಬಿಡುಗಡೆ ಆಗದ ಕಾರಣ ಈ ಅಭಿಯಾನಗಳ ಯೋಜನೆಗಳಿಗೆ ಒಳಪಡುವಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಾವಿರಾರು ಶಿಕ್ಷಕರಿಗೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ವೇತನ ಬಂದಿರಲಿಲ್ಲ.
ಬಿಸಿಯೂಟಕ್ಕೆ ₹2.90 ಕೋಟಿ: ದಸರಾ ರಜೆ ಅವಧಿಯಾದ ಅಕ್ಟೋಬರ್ 9ರಿಂದ 17ರವರೆಗೆ ಹಾಗೂ ವರ್ಷದ 16 ಶನಿವಾರಗಳಂದು ಪರಿಹಾರ ಬೋಧನಾ ತರಗತಿಗಳು ನಡೆಯಲಿವೆ. ಇವುಗಳಿಗೆ ಹಾಜರಾಗುವ 1.07 ಲಕ್ಷ ವಿದ್ಯಾರ್ಥಿಗಳ ಬಿಸಿಯೂಟ ಮತ್ತು ಅಡುಗೆ ಸಿಬ್ಬಂದಿಯ ಗೌರವಧನಕ್ಕಾಗಿ ₹2.90 ಕೋಟಿ ಬಿಡುಗಡೆ ಮಾಡಲಾಗಿದೆ.