ಗ್ರಾಮಗಳ ಭಾಗ್ಯಜ್ಯೋತಿ ಫಲಾನುಭವಿಗಳ ಮನೆಗಳಿಗೂ ಮೀಟರ್ ಅಳವಡಿಸಲು ರೈತ ಸಂಘ ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಯೋಜನೆಯಡಿ ಸೌಲಭ್ಯ ಪಡೆಯುವವರು ಬಡವರು. ಭಾಗ್ಯಜ್ಯೋತಿ ಮೀಟರ್ ಅಳವಡಿಸುವ ಕಂಪನಿಗಳು ಆಗಾಗ್ಗೆ ಮೀಟರ್ ಬದಲಿಸುತ್ತವೆ. ಈ ಮೀಟರ್ಗೆ ಹಣ ನೀಡಲು ಬಡವರಿಗೆ ಸಾಧ್ಯವಿಲ್ಲ ಎಂದು ರೈತ ಮುಖಂಡರು ತಡೆಯೊಡ್ಡಿದ್ದರು.