ವಿಚಾರಣೆ ನಡೆಸಿದ ಪೀಠವು, ‘ನೇಮಕಾತಿ ಆದೇಶ ಕಾನೂನು ಬಾಹಿರವಾಗಿದೆ‘ ಎಂಬ ಅಂಶವನ್ನು ಪುರಸ್ಕರಿಸಿದೆ ಹಾಗೂ ಬಡ್ತಿ ನೀಡಿರುವುದನ್ನು ಪ್ರಶ್ನಿಸಿ, ‘ನಮಗೇ ಬಡ್ತಿ ನೀಡಬೇಕು‘ ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ಅರ್ಜಿದಾರರ ಪರವಾಗಿ ವಕೀಲ ವಿಜಯಕುಮಾರ್ ಮತ್ತು ಸರ್ಕಾರದ ಪರವಾಗಿ ಡಿ.ಸಿ.ಪರಮೇಶ್ವರಯ್ಯ ವಾದ ಮಂಡಿಸಿದ್ದರು.