ಆಕ್ಷೇಪಣೆ ಏನು?: ‘ನಾನು ಈಗಾಗಲೇ 18 ವರ್ಷ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದೇನೆ. ಇದರಲ್ಲಿ 10 ವರ್ಷ ಏಕಾಂತ ಸೆರೆವಾಸ ಪೂರೈಸಿದ್ದೇನೆ. ಈ ಸಮಯದಲ್ಲಿ ನಾನು ಮಾನಸಿಕ ರೋಗದಿಂದ ನರಳಿದ್ದೇನೆ. ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿದ್ದ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಇದು ಕಾನೂನು ಬಾಹಿರ ಎಂದು ಘೋಷಿಸಬೇಕು. ಸಂವಿಧಾನದ 21ನೇ ವಿಧಿಯ ಅನುಸಾರ ನನ್ನ ಜೀವಕ್ಕೆ ರಕ್ಷಣೆ ನೀಡಬೇಕು’ ಎಂದು ಕೋರಿ ಉಮೇಶ್ ರೆಡ್ಡಿ ಈ ಅರ್ಜಿ ಸಲ್ಲಿಸಿದ್ದಾನೆ.