ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಕ್ಕಾಗಿ ವಿಶ್ವನಾಥ್ ಕೇಳಿದ ಕ್ಷಮೆ, ಸಮ್ಮಿಶ್ರ ಸರ್ಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನವಾಯಿತು ಎಂದು ತೋಡಿಕೊಂಡ ಅಳಲು ಜನರ ಮನಸ್ಸನ್ನು ಮುಟ್ಟಲಿಲ್ಲ. ಬದಲಿಗೆ, ತಮ್ಮೊಂದಿಗೆ ಕ್ಷೇತ್ರದ ಮರ್ಯಾದೆಯನ್ನೂ ಹರಾಜು ಹಾಕಿದರೆಂದು ಸಿಟ್ಟಿಗೆದ್ದಿದ್ದರು. ಕೋಮುವಾದಿಯೆಂದು ತಾವೇ ಜರಿದಿದ್ದ ಪಕ್ಷದ ಅಭ್ಯರ್ಥಿಯಾಗಿ, ಹೊಸ ಚಿಹ್ನೆಯೊಂದಿಗೆ ಮತ ಕೇಳಬೇಕಾಗಿ ಬಂದ ಸವಾಲು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.