ವಿಧಾನ ಪರಿಷತ್ನಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ.ಎಂ. ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ’ರಾಜ್ಯದಲ್ಲಿ ಪ್ರಸ್ತುತ 689 ಕೃಷಿ ಯಂತ್ರಧಾರೆ ಕೇಂದ್ರಗಳಿವೆ. ಇನ್ನೂ ಹೋಬಳಿಗೊಂದು ಯಂತ್ರಧಾರೆ ಕೇಂದ್ರ ತೆರೆಯಬೇಕಾಗಿದೆ. ಆದರೆ, ಈಗ ಬಹುತೇಕ ಕೆಂದ್ರಗಳ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಸಂಸ್ಥೆಗಳ ಒಪ್ಪಂದದ ಅವಧಿ ಮುಗಿದಿದೆ. ಇದನ್ನು ಮುಂದುವರಿಸಲು ಸಂಸ್ಥೆಗಳು ಅಸಕ್ತಿ ವಹಿಸುತ್ತಿಲ್ಲ. ಹೀಗಾಗಿ, ಇನ್ನು ಮುಂದೆ ಈ ಕೇಂದ್ರಗಳನ್ನು ರೈತ ಉತ್ಪಾದಕ ಸಂಸ್ಥೆಗಳಿಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ‘ ಎಂದು ತಿಳಿಸಿದರು.