ಕೊಪ್ಪಳ: ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ಮಂಗಳವಾರ ಮೊಹರಂ ಆಚರಣೆ ಸಂದಂರ್ಭದಲ್ಲಿ ಅಲಾಯಿ ಕುಣಿಗೆ ಬಿದ್ದು ಖಾದರ್ ಸಾಬ್ ಪಿಂಜಾರ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ 'ಕವಡೆ ಪೀರಾ' ದೇವರ ಎದುರು ತೆಗೆಯಲಾಗಿದ್ದ ಅಲಾಯಿ ಕುಣಿಯ ಸುತ್ತ ಭಕ್ತರು ಜಮಾವಣೆಗೊಂಡಿದ್ದರು.ಈ ಸಂದರ್ಭದಲ್ಲಿ ಖಾದರ್ ಆಯತಪ್ಪಿ ಬಿದ್ದರು. ಕೂಡಲೇ ಖಾಜಾಸಾಬ್ ಎಂಬುವವರು ಕುಣಿಗೆ ಹಾರಿ ಮೇಲೆಕ್ಕೆ ಎತ್ತಿದರು. ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಖಾಜಾಸಾಬ್ರನ್ನು ಗಂಗಾವತಿ ಆಸ್ಪತ್ರೆಗೂ, ಖಾದರ್ ಸಾಬ್ ಅವರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೂ ದಾಖಲಿಸಲಾಗಿದೆ.