ನವದೆಹಲಿ: ‘ಕಾವೇರಿ ನ್ಯಾಯ ಮಂಡಳಿಯ ಐ ತೀರ್ಪು ನಮ್ಮ ತೀರ್ಪಿನಲ್ಲಿ ವಿಲೀನಗೊಂಡಿದ್ದರಿಂದ ಕಾವೇರಿ ನಿರ್ವಹಣಾ ಮಂಡಳಿಯ ವಿಷಯ ಮತ್ತೆ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ’ ಎಂದು ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ತಮಿಳುನಾಡು ಪರ ವಕೀಲ ನಾಫಡೆ ಅವರಿಗೆ ಸೂಚಿಸಿದರು.
ನಿರ್ವಹಣಾ ಮಂಡಳಿ ರಚನೆಯ ಕುರಿತು ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿ ಜತೆಗೆ ಕೇಂದ್ರದ ಸ್ಪಷ್ಟನಾ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಪೀಠವು ‘ನಾವು ನೀರು ಹಂಚಿ ತೀರ್ಪು ನೀಡಿದ್ದೇವೆ. ರಾಜ್ಯಗಳು ನಮ್ಮ ತೀರ್ಪಿಗೆ ಬದ್ಧವಾಗಿರಬೇಕು’ ಎಂದು ತಿಳಿಸಿತು.
ಪರೋಕ್ಷವಾಗಿ ಸ್ಕೀಮ್ ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದ ಸುಪ್ರೀಂ ಕೋರ್ಟ್, ‘ಮೇ 3ರ ಒಳಗೆ ಸ್ಕೀಮ್ನ ಕರಡು ಸಲ್ಲಿಸುವಂತೆ ಸೂಚನೆ ನೀಡಿದೆ.