ತುಮಕೂರು: ‘ವಿಶ್ವೇಶ್ವರಯ್ಯ ಜಲ ನಿಗಮದ ₹156 ಕೋಟಿ ಕಾಮಗಾರಿಯಲ್ಲಿ ಎಂ. ಬಿ. ಪಾಟೀಲ್ ₹25 ಕೋಟಿಯನ್ನು ಕಿಕ್ ಬ್ಯಾಕ್ ಪಡೆದಿರುವುದು ಸತ್ಯ. ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣಪುಟ್ಟ ದೋಷಗಳಿದ್ದರೂ ಅವರು ಹೇಳಿದಂತೆ ಕೇಳುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಶುಕ್ರವಾರ ಯಾದವ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಮಿಷನ್ ಪಡೆದು ಕಾಮಗಾರಿ ಗುತ್ತಿಗೆಯನ್ನು ಹೊರ ರಾಜ್ಯದವರಿಗೆ ಕೊಡಲಾಗಿದೆ ಎಂದು ನಾವು ಪ್ರಕರಣ ಬಯಲಿಗೆಳೆದ ಮೇಲೆ ಈಗ ವಿತ್ ಡ್ರಾ ಮಾಡಿದ್ದೇವೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ ಎಂದು ತಿಳಿಸಿದರು.
‘ಇದು ಕಾಂಗ್ರೆಸ್ ಪಕ್ಷದ ಸರ್ಕಾರದ ದೊಂಬರಾಟ ಅಲ್ಲದೇ ಬೇರೇನೂ ಅಲ್ಲ’ ಎಂದು ಕಿಡಿಕಾರಿದರು.
‘ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕುರಿತಂತೆ ಸಿದ್ಧಗಂಗಾಮಠದ ಕಿರಿಯ ಶ್ರೀಗಳು ಸ್ವಾಗತ ಮಾಡಿರುವ ಕುರಿತಂತೆ ನಾನೇನು ಪ್ರತಿಕ್ರಿಯಿಸುವುದಿಲ್ಲ’ ಎಂದರು.